Thursday, June 11, 2020

ಮಕ್ಕಳಾಟ

Sunday, July 08, 2018

ತೂಗುಮಂಚ


ತೂಗುಮಂಚದಲ್ಲಿ ಕೂತು, ಮೇಘಶ್ಯಾಮ ರಾಧೆಗಾತು...
ರಚನೆ: ಎಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ: ಸಿ.ಅಶ್ವಥ್
ಮೂಲ ಗಾಯನ: ರತ್ನಮಾಲಾ ಪ್ರಕಾಶ್
ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು
ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ, ಹಮ್ಮನುಸಿರ ಬಿಟ್ಟಳು
ಸೆರಗು ಜಾರುತಿರಲು ಕೆಳಗೆ, ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ ಬೆಳ್ಳಿ ಹಾಲ ಬಟ್ಟಲು
ಚಾಚುತಿರಲು ಅರಳಿಗರಳು, ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೇಲಿತು
ತನಗೆ ತಾನೆ ತೂಗುಮಂಚ ತಾಗುತಿತ್ತು ದೂರದಂಚ
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು

Friday, June 15, 2018

ಎಳೆಯರ ರಾಮಾಯಣ

ಪೂರ್ವಂ ರಾಮಂ  ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ ।।

ವೈದೇಹಿ ಹರಣಂ ಜಟಾಯು ಮರಣಂ 
ಸುಗ್ರೀವ ಸಂಭಾಷಣಂ ।।

ವಾಲಿ ನಿಗ್ರಹಣಂ ಸಮುದ್ರ ತರಣಂ
ಲಂಕಾಪುರಿ ದಹನಂ ।।

ಪಶ್ಚಾತ್ ರಾವಣ ಕುಂಭಕರ್ಣಾದಿ ಮರ್ಧನಂ  (ಹರಣಂ)
ಏತದ್ದಿತಿ ರಾಮಾಯಣಂ ।।

------------------------------------------------------------------

ಕಾಶಿ ದ್ವಾರಕೆ
 ಕುಂಭಕೋಣ ಮಧುರೆ 
ಕೇದಾರ ರಾಮೇಶ್ವರ 
ಪಂಪಾಕ್ಷೇತ್ರೇ ಅವೋವಳ 
ಶ್ರೀಮಷ್ಠಿ  ಮಧ್ಯಾರ್ಜುನ 
ಏವಂ ಪುಣ್ಯ ಸಹಸ್ರ ಕೋಟಿ ಅಧಿಕಂ
 ಓಂಕಾರ ನಾರಾಯಣಂ 

------------------------------------------------------------------

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು           ||ಪ||
ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು      ||೧||
ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ            ||೨||
ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು     ||೩||

Thursday, June 14, 2018

ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ



ರಾಗ: ಕಲ್ಯಾಣಿ-ಆದಿತಾಳ

ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ ||ಪ||
ವಾಗಭಿಮಾನಿ ವರಬ್ರಹ್ಮಾಣಿ | ಸುಂದರವೇಣಿ-ಸುಚರಿತ್ರಾಣಿ ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೊರಿಸೆಂದು ಪ್ರಾರ್ಥಿಪೆನಮ್ಮ ||೧||

ಪಾಡುವೆ ಶ್ರುತಿಯ- ಬೇಡುವೆ ಮತಿಯ ಪುರಂದರ
ವಿಠಲನ ಹಿರಿಯ (ಸೋದರ) ಸೊಸೆಯ ||೨||

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ



ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೆ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ ||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳ್ ಈಪರಿ ರೂಪವುಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರ್ ಹೊಡೆದಾಡಿ ಹತರಾಗಿ ಪೋದರು || ೨ ||

ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||

ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||


ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||

ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧ್ವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||

ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||

ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||

ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||

ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||

ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||

ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||

ರಾಮ ಮಂತ್ರವ ಜಪಿಸೋ



ರಾಮ ಮಂತ್ರವ ಜಪಿಸೋ – ರಾಗ : ಮಧ್ಯಮವತಿ. ಆದಿ ತಾಳ. ಪುರಂದರದಾಸರು


ರಾಮ ಮಂತ್ರವ ಜಪಿಸೋ ಹೇ ಮನುಜ
ರಾಮ ಮಂತ್ರವ ಜಪಿಸೋ
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ರಾಮ|

ಕುಲಹೀನನಾದರು ಕೂಗಿ ಜಪಿಸೋ ಮಂತ್ರ
ಸಲೆಬೀದಿಯೊಳು ಉಚ್ಚರಿಸುವ ಮಂತ್ರ
ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊoಬುವ ಮಂತ್ರ || ರಾಮ|

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ರಿಶಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ರಾಮ|

ಜ್ಞಾನನಿಧಿ ನಮ್ಮ ಆನ೦ದ ತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನು ಕುಲಾ೦ಬುಧಿ ಸೋಮನೆನಿಪ ನಮ್ಮ
ದೀನ ರಕ್ಷಕ ಪುರಂದರವಿಠಲನ ಮಂತ್ರ || ರಾಮ|

Tuesday, May 22, 2018

ದಾಸರ ಪದಗಳು - ೧ - ಇಟ್ಟಿಗೆ ಮ್ಯಾಲೆ

ಇಟ್ಟಿಗೆ ಮ್ಯಾಲೆ ನಿಂತ ನಮ್ಮ। ವಿಠ್ಠಲ ತಾನು।
ಪುಟ್ಟ ಪಾದ ಊರಿಕೊಂಡು। ಗಟ್ಟಿ ಯಾಗಿ ನಿಂತುಕೊಂಡು।
ಟೊಂಕದ ಮ್ಯಾಲೆ ಕೈಯಾನಿಟ್ಟು। ಭಕ್ತರು ಬರುವುದ ನೋಡುವನಂತೆ।  ।।ಇಟ್ಟಿಗೆ ।।

ಪಂಡರ ಪುರದಲಿ ಇರುವನಂತೆ। ಪಾಂಡು ರಂಗ ಎಂಬುವನಂತೆ।೨।
ಚಂದ್ರ ಭಾಗ ಪಿತನಿವನಂತೆ। ಅಂಗನೆ ರುಕ್ಮಿಣಿ ಅರಸನಂತೆ।೨।         ।।ಇಟ್ಟಿಗೆ ।।

ಹಣದ ಆಸೆ ಇವಗಿಲ್ಲವಂತೆ।  ಕನಕ ರಾಶಿ ಬೇಕಿಲ್ಲವಂತೆ।೨।
ನಾದ ಬ್ರಹ್ಮ ನೆಂಬುವನಂತೆ।  ಭಕ್ತರು ಕರೆದರೆ ಬರುವನಂತೆ।೨।        ।।ಇಟ್ಟಿಗೆ ।।

ಕರಿಯ ಕಂಬಲಿ ಹೊದ್ದಿಹನಂತೆ। ಹಣೆಯಲಿ ನಾಮ ಹಚ್ಚಿಹನಂತೆ।೨।
ತುಳಸಿ ಮಾಲೆ ಹಾಕ್ಯನಂತೆ। ಪುರಂದರ ವಿಠಲ ನೆಂಬುವನಂತೆ।೨।     ।।ಇಟ್ಟಿಗೆ ।।






Sunday, June 12, 2016

ದಾಂಪತ್ಯ

ಕ್ಷಣ ಮಾತ್ರದ ಸುಮುಹೂರ್ತ
ಬೆಸೆದಿದೆ ಬಾಳುದ್ದದ ಬಾಂದವ್ಯ

ಎದೆಯುಸಿರ ಬೆಚ್ಚಗಿನ ನೆನಪು
ಹಸಿರಾಗಿರಿಸಿದೆ ಒಲವಿನ ಸಾನಿಧ್ಯ 

ಜೊತೆಯಾಗಿ ಕಳೆದ ವರುಷದ ಹರುಷದಲಿ
ನಿನ್ನೊಳು ನಾ ನನ್ನೊಳು ನೀ 
                              --ಗುಬ್ಬಚ್ಚಿ 

ತೆರೆದ ಅಂತರ್-ಪಟದಲ್ಲಿಯ ನೋಟ
ಸೂಸಿತ್ತು ಉದ್ವೇಗ ಆತಂಕ 

ಅನುದಿನದ ಒಡನಾಟ ಬೆಸುಗೆ
ಬೆಳೆಸಿತ್ತು ಪ್ರೀತಿ-ಪ್ರಣಯ 

ಬಾಳ ಸಂಜೆಯ ಮಾತು-ಮೌನ
ಉಳಿಸಿತ್ತು ಸ್ನೇಹ ಸಂಬಂಧ 
                           --ಗುಬ್ಬಚ್ಚಿ

Saturday, October 05, 2013

ಭರತನಾಟ್ಯಂ


Apeksha N Mundargi




Bharatanjali Group





 Prathibha Kini