Friday, June 15, 2018

ಎಳೆಯರ ರಾಮಾಯಣ

ಪೂರ್ವಂ ರಾಮಂ  ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ ।।

ವೈದೇಹಿ ಹರಣಂ ಜಟಾಯು ಮರಣಂ 
ಸುಗ್ರೀವ ಸಂಭಾಷಣಂ ।।

ವಾಲಿ ನಿಗ್ರಹಣಂ ಸಮುದ್ರ ತರಣಂ
ಲಂಕಾಪುರಿ ದಹನಂ ।।

ಪಶ್ಚಾತ್ ರಾವಣ ಕುಂಭಕರ್ಣಾದಿ ಮರ್ಧನಂ  (ಹರಣಂ)
ಏತದ್ದಿತಿ ರಾಮಾಯಣಂ ।।

------------------------------------------------------------------

ಕಾಶಿ ದ್ವಾರಕೆ
 ಕುಂಭಕೋಣ ಮಧುರೆ 
ಕೇದಾರ ರಾಮೇಶ್ವರ 
ಪಂಪಾಕ್ಷೇತ್ರೇ ಅವೋವಳ 
ಶ್ರೀಮಷ್ಠಿ  ಮಧ್ಯಾರ್ಜುನ 
ಏವಂ ಪುಣ್ಯ ಸಹಸ್ರ ಕೋಟಿ ಅಧಿಕಂ
 ಓಂಕಾರ ನಾರಾಯಣಂ 

------------------------------------------------------------------

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು           ||ಪ||
ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು      ||೧||
ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ            ||೨||
ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು     ||೩||

0 Comments:

Post a Comment

<< Home